ದೇವಸ್ಥಾನಗಳಲ್ಲಿ ಕಳವು ಮಾಡಿ ಪರಾರಿಯಾಗಿದ್ದ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಮಳವಳ್ಳಿ ಗ್ರಾಮಾಂತರ ಪೊಲೀಸರು ಯಶ್ವಸಿಯಾಗಿದ್ದಾರೆ.
ಮಳವಳ್ಳಿ ತಾಲ್ಲೂಕಿನ ಗೌಡಗೆರೆ ಗ್ರಾಮದ ನಿವಾಸಿ 35ವರ್ಷದ ಪ್ರದೀಪ್ ಬಂಧಿತ ಆರೋಪಿಯಾಗಿದ್ದು, ತಾಲ್ಲೂಕಿನ ಗೌಡಗೆರೆ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಮೂರು ಹಿತ್ತಾಳೆ ಮಂಟಪಗಳು,18 ಹಿತ್ತಾಳೆ ಬಿರಡೆಗಳು, 03 ಹಿತ್ತಾಳೆ ಛತ್ರಿಗಳು, 1 ಹಿತ್ತಾಳೆಯ ರಥದಕಳಸ ಹಾಗೂ ಪೇಟೆ ಮಂಚನಹಳ್ಳಿ ಗ್ರಾಮದ ಶ್ರೀ ಮೂಗದೇವಮ್ಮ ದೇವರ ದೇವಸ್ಥಾನದಲ್ಲಿದ್ದ ಅರಿಶಿನ ಕುಂಕುಮದ ಬಟ್ಟಲು, 1ಜೊತೆ, 100 ಗ್ರಾಂ ಬೆಳ್ಳಿತಟ್ಟೆ ಒಂದು ಜೊತೆ, 80 ಗ್ರಾಂ ನ 1 ಬಟ್ಟಲು, 2 ಹಿತ್ತಾಳೆ ಬಿಂದಿಗೆ, 1 ಜೊತೆ ಹಿತ್ತಾಳೆ ದೀಪಾಲೆ ಕಂಬಗಳನ್ನು ಕಳ್ಳತನವಾಗಿದೆ ಎಂದು ಪ್ರತ್ಯೇಕ ದೂರು ದಾಖಲಾಗಿದ್ದು ದೂರಿನ ಅನ್ವಯ ಪ್ರಕರಣ ದಾಖಲು ಮಾಡಿಕೊಂಡು, ಡಿ ವೈ ಎಸ್ ಪಿ ಕೃಷ್ಣಪ್ಪನವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಇನ್ಸ್ ಪೆಕ್ಟರ್ ಮಹೇಶ್ ಮತ್ತು ಸಬ್ ಇನ್ಸ್ ಪೆಕ್ಟರ್ ಶ್ರವಣ ದಾಸರೆಡ್ಡಿ, ನೇತೃತ್ವದಲ್ಲಿ ಸಿಬ್ಬಂದಿಗಳು ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿ ಪ್ರದೀಪ್ ನನ್ನು ಬಂಧಿಸಿ ಆರೋಪಿಯಿಂದ 5.50 ಲಕ್ಷ ರೂ ಮೌಲ್ಯದ ದೇವರ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಪತ್ತೆ ಹಚ್ಚಿದ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.