ಬೆಂಗಳೂರು, ಮಾರ್ಚ್ 10: ರಾಜ್ಯದಲ್ಲಿ ಷಡಾ/ಬೀಳು ಜಮೀನುಗಳ ರೆಸ್ಟೋರ್ ಕುರಿತಾಗಿ, ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 119(2)ರಲ್ಲಿ ತಿದ್ದುಪಡಿ ಮಾಡಿರುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ. ಈ ಸಂಬಂಧ, ದಿನಾಂಕ: 23-02-2023 ರಂದು ಆರ್ಡಿ 17 ಎಲ್ಜಿಪಿ 2023ರ ಮೂಲಕ ಕರಡು ನಿಯಮಗಳ ಅಧಿಸೂಚನೆ ಹೊರಡಿಸಲಾಗಿದ್ದು, ಅಂತಿಮ ಅಧಿಸೂಚನೆಯ ನಂತರ ರೆಸ್ಟೋರ್ ಪ್ರಕ್ರಿಯೆ ಆರಂಭವಾಗಲಿದ್ದು, ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು.
ಅಧಿಕಾರಿಗಳಿಗೆ ರೆಸ್ಟೋರ್ ಅನುಮತಿ: ಮಂಡ್ಯ ವಿಧಾನಸಭಾ ಕ್ಷೇತ್ರದ ಸದಸ್ಯರಾದ ರವಿಕುಮಾರ್ (ಗಣಿಗ) ಅವರ ಪ್ರಶ್ನೆಗೆ ಉತ್ತರಿಸುತ್ತಾ, ಸಚಿವರು, ದಿನಾಂಕ: 07-12-2012 ರಿಂದ 6-09-2014ರ ಅವಧಿಯಲ್ಲಿ ಭೂ ಕಂದಾಯ ನಿಯಮಗಳ 119ನೇ ನಿಯಮದ ತಿದ್ದುಪಡಿ ಮೂಲಕ ಜಿಲ್ಲಾಧಿಕಾರಿಗಳಿಗೆ ಬೀಳು ರೆಸ್ಟೋರ್ ಮಾಡುವ ಅಧಿಕಾರ ನೀಡಲಾಗಿತ್ತು ಎಂದು ವಿವರಿಸಿದರು.
ಅಧಿಸೂಚನೆ ಬಳಿಕ ಭೂಮಿ ತಂತ್ರಾಂಶದ ಬಳಕೆ: ಸಚಿವರು, 07-12-2022 ರಿಂದ 06-09-2014ರ ಅವಧಿಯಲ್ಲಿ ರೆಸ್ಟೋರ್ ಆದೇಶ ಮಾಡಲಾದ ಪ್ರಕರಣಗಳಿಗೆ ಭೂಮಿ ತಂತ್ರಾಂಶದ ಮೂಲಕ ಫಡಾ/ಬೀಳು ರೆಸ್ಟೋರ್ ಮಾಡಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು. ಆದರೆ ಮ್ಯುಟೇಶನ್ ಪ್ರಕ್ರಿಯೆಗೆ ಬಾಕಿ ಇರುವ ಪ್ರಕರಣಗಳಲ್ಲಷ್ಟೇ ಭೂಮಿ ತಂತ್ರಾಂಶ ಬಳಸಲು ಅನುಮತಿ ಇದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಅರ್ಜಿದಾರರ ಪರಿಶೀಲನೆ: ಅರ್ಜಿದಾರರು ಈಗಾಗಲೇ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲನೆ ಮಾಡಿ, ನೈಜ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಹೊಸದಾಗಿ ಅರ್ಜಿ ಸಲ್ಲಿಸಿದವರ ಸ್ಥಿತಿಗತಿಗಳನ್ನು ವಿಶ್ಲೇಷಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
ನೀಡಿದ ಸ್ಪಷ್ಟನೆ: ಹಾಲಿ ಬಾಕಿ ಇರುವ ಪ್ರಕರಣಗಳಿಗೆ ಸರಿಯಾದ ಕ್ರಮ ವಹಿಸಲಾಗುವುದು ಎಂದು ಸಚಿವರು ವಿಧಾನಸಭೆಯಲ್ಲಿ ಭರವಸೆ ನೀಡಿದರು.