ಬೆಂಗಳೂರು: ಬೆಳಗಾವಿಯ ವಾಯು ಸೈನಿಕರ ತರಬೇತಿ ಶಾಲೆಯಲ್ಲಿ 06 ಜೂನ್ 2025 ರಂದು ಅಗ್ನಿವೀರವಾಯು ತರಬೇತುದಾರರ (AGVT) ಐದನೇ ಬ್ಯಾಚ್ನ ಪಾಸಿಂಗ್ ಔಟ್ ಪರೇಡ್ (POP) ವಿಜೃಂಭಣೆಯಿಂದ ನಡೆಯಿತು. 1634 ಪುರುಷ ಮತ್ತು ಮಹಿಳಾ ಅಗ್ನಿವೀರವಾಯು ತರಬೇತುದಾರರು 22 ವಾರಗಳ ಕಠಿಣ ಮತ್ತು ರೂಪಾಂತರಕಾರಿ ಮೂಲಭೂತ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ದೇಶಸೇವೆಗೆ ಸಿದ್ಧರಾದರು.
ಸಮಾರಂಭದ ಪರಿಶೀಲನಾಧಿಕಾರಿಯಾಗಿದ್ದ ಏರ್ ವೈಸ್ ಮಾರ್ಷಲ್ ಪಿಸಿಪಿ ಆನಂದ್, ಎಚ್ಕ್ಯೂಟಿಸಿ ಐಎಎಫ್ನ ಹಿರಿಯ ಆಡಳಿತಾಧಿಕಾರಿ, ಅಗ್ನಿವೀರವಾಯುಗಳ ಶಿಸ್ತಿನ ಕವಾಯತು ಮತ್ತು ಉತ್ಸಾಹದಾಯಕ ಪ್ರದರ್ಶನವನ್ನು ಕೊಂಡಾಡಿದರು. ತರಬೇತಿಯಲ್ಲಿ ಯಶಸ್ವಿಯಾದವರನ್ನು ಅಭಿನಂದಿಸಿದ ಅವರು, ಅತ್ಯುತ್ತಮ ಸಾಧನೆಗೈದವರಿಗೆ ಪ್ರಶಸ್ತಿಗಳನ್ನು ವಿತರಿಸಿದರು. ಶ್ವೇತಾ ‘ಶೈಕ್ಷಣಿಕ ಶ್ರೇಷ್ಠತೆ’, ಕೃಷ್ ಪರಗಾಯ್ ‘ಜಿಎಸ್ಟಿಯಲ್ಲಿ ಶ್ರೇಷ್ಠ’, ಆಶಿಶ್ ಕುಮಾರ್ ‘ಶ್ರೇಷ್ಠ ಗುರಿಗಾರ’ ಮತ್ತು ಪ್ರವೀಣ್ ಕುಮಾರ್ ‘ಸರ್ವತೋಮುಖ ಶ್ರೇಷ್ಠ’ ಪ್ರಶಸ್ತಿಗಳನ್ನು ಪಡೆದರು.

ವಿಶ್ವದ ಬದಲಾಗುತ್ತಿರುವ ಭದ್ರತಾ ಸವಾಲುಗಳನ್ನು ಎದುರಿಸಲು ಅಗ್ನಿವೀರವಾಯುಗಳು ಜಾಗರೂಕರಾಗಿ, ಹೊಂದಿಕೊಳ್ಳುವ ಮನೋಭಾವದೊಂದಿಗೆ ಕರ್ತವ್ಯನಿಷ್ಠರಾಗಿರಬೇಕೆಂದು ಆನಂದ್ ಸೂಚಿಸಿದರು. ನಿರಂತರ ಕಲಿಕೆ, ಸವಾಲುಗಳನ್ನು ಸ್ವೀಕರಿಸುವುದು ಮತ್ತು ಕಾರ್ಯಕ್ಷಮತೆಗೆ ಸದಾ ಸಿದ್ಧರಾಗಿರುವುದು ಅತ್ಯಗತ್ಯ ಎಂದು ಒತ್ತಿ ಹೇಳಿದ ಅವರು, ಸೇವೆಯ ಒಳಗೆ-ಹೊರಗೆ ಉನ್ನತ ನಡತೆ ಮತ್ತು ಸಮಗ್ರತೆಯನ್ನು ಕಾಪಾಡಲು ಯುವ ಯೋಧರನ್ನು ಉತ್ಸಾಹಿಸಿದರು.

ಕಾರ್ಯಕ್ರಮವು ಅಗ್ನಿವೀರವಾಯುಗಳ ಕುಟುಂಬಗಳಿಗೆ ಹೆಮ್ಮೆಯ ಮತ್ತು ಭಾವುಕ ಕ್ಷಣವಾಗಿತ್ತು. ಸಮಾರಂಭವನ್ನು ವೀಕ್ಷಿಸಲು ದೊಡ್ಡ ಸಂಖ್ಯೆಯಲ್ಲಿ ಕುಟುಂಬ ಸದಸ್ಯರು ಆಗಮಿಸಿದ್ದರು. ಕುಟುಂಬಗಳ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸಿದ ಆನಂದ್, ಏರೋಸ್ಪೇಸ್ ರಕ್ಷಕರನ್ನು ರೂಪಿಸುವಲ್ಲಿ ಅವರ ಪಾತ್ರವನ್ನು ಶ್ಲಾಘಿಸಿದರು.
ವಾಯು ಸೈನಿಕರ ತರಬೇತಿ ಶಾಲೆಯ ಏರ್ ಆಫೀಸರ್ ಕಮಾಂಡಿಂಗ್ ಮತ್ತು ಸಿಬ್ಬಂದಿಯ ಶ್ರಮವನ್ನು ಕೊಂಡಿದ ಏರ್ ವೈಸ್ ಮಾರ್ಷಲ್, ಯುವಕರನ್ನು ಗೌರವ, ಧೈರ್ಯ ಮತ್ತು ಬದ್ಧತೆಯೊಂದಿಗೆ ರಾಷ್ಟಕ್ಕಾಗಿ ಸೇವೆ ಸಲ್ಲಿಸಲು ಸಮರ್ಥರನ್ನಾಗಿ ರೂಪಿಸಿದ ಕಾರ್ಯವನ್ನು ಮೆಚ್ಚಿದರು.