ಬೆಂಗಳೂರು, ಜೂನ್ 04, 2025: ಬೆಂಗಳೂರಿನ ಆರ್ಮಿ ಸರ್ವೀಸ್ ಕಾರ್ಪ್ಸ್ ಸೆಂಟರ್ (ನಾರ್ತ್)ನಲ್ಲಿ ಇಂದು ನಡೆದ ಭವ್ಯವಾದ ಪರೇಡ್ನಲ್ಲಿ ಭಾರತೀಯ ಸೇನೆಯ 1363ಕ್ಕೂ ಹೆಚ್ಚು ಅಗ್ನಿವೀರರು (ಡ್ರೈವರ್ ಮೋಟಾರ್ ವೆಹಿಕಲ್) ತಮ್ಮ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಪಾಸಿಂಗ್ ಔಟ್ ಪರೇಡ್ನಲ್ಲಿ ಭಾಗವಹಿಸಿದರು. 01 ನವೆಂಬರ್ 2024 ರಂದು ಆರಂಭವಾದ ತರಬೇತಿಯ ಐದನೇ ಬ್ಯಾಚ್ಗೆ ಸೇರಿದ ಈ ಅಗ್ನಿವೀರರು ಇಂದು ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು.
ಪರೇಡ್ನ್ನು ಆರ್ಮಿ ಸರ್ವೀಸ್ ಕಾರ್ಪ್ಸ್ ಸೆಂಟರ್ ಮತ್ತು ಕಾಲೇಜಿನ ಕಮಾಂಡಂಟ್ ಲೆಫ್ಟಿನೆಂಟ್ ಜನರಲ್ ಜೆ.ಕೆ.ಗೇರಾ ಅವರು ವೀಕ್ಷಿಸಿದರು. ತಮ್ಮ ಭಾಷಣದಲ್ಲಿ, ಯುವ ಸೈನಿಕರಿಗೆ “ಇಮಾನ್ದಾರಿ, ವಫಾದಾರಿ ಮತ್ತು ಬಹದೂರಿ” ಎಂಬ ಸೈನಿಕ ಗುಣಗಳನ್ನು ಮೈಗೂಡಿಸಿಕೊಳ್ಳುವಂತೆ ಒತ್ತಾಯಿಸಿದರು.
ಈ ಭವ್ಯ ಸಮಾರಂಭವನ್ನು ಅಗ್ನಿವೀರರ ಹೆಮ್ಮೆಯ ತಂದೆ-ತಾಯಿಗಳು ವೀಕ್ಷಿಸಿದರು. ತಮ್ಮ ಮಕ್ಕಳನ್ನು ದೇಶದ ಸೇವೆಗಾಗಿ ಭಾರತೀಯ ಸೇನೆಗೆ ಸೇರಲು ಪ್ರೋತ್ಸಾಹಿಸಿದ ಈ ಪೋಷಕರಿಗೆ ಭಾರತೀಯ ಸೇನೆಯಿಂದ ಸ್ಥಾಪಿತವಾದ ಪ್ರತಿಷ್ಠಿತ “ಗೌರವ ಪದಕ”ವನ್ನು ನೀಡಿ ಗೌರವಿಸಲಾಯಿತು.
ಆರ್ಮಿ ಸರ್ವೀಸ್ ಕಾರ್ಪ್ಸ್ ಸೆಂಟರ್ (ನಾರ್ತ್) ಭಾರತೀಯ ಸೇನೆಯ ಆರ್ಮಿ ಸರ್ವೀಸ್ ಕಾರ್ಪ್ಸ್ ಘಟಕಗಳಿಗೆ ಬೆಂಬಲ ನೀಡಲು ಮೆಕ್ಯಾನಿಕಲ್ ಟ್ರಾನ್ಸ್ಪೋರ್ಟ್ ಡ್ರೈವರ್ಗಳಿಗೆ ತರಬೇತಿ ನೀಡುವ ಪ್ರಮುಖ ಸಂಸ್ಥೆಯಾಗಿದೆ.
ಅಗ್ನಿಪಥ್ ಯೋಜನೆಯನ್ನು ಭಾರತ ಸರ್ಕಾರವು 14 ಜೂನ್ 2022 ರಂದು ಸೇನೆಯ ಮೂರು ವಿಭಾಗಗಳಿಗೆ ಸೈನಿಕರ ನೇಮಕಾತಿಗಾಗಿ ಜಾರಿಗೆ ತಂದಿತು.