ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರ ಅನುದಾನದಿಂದ ಬೆಂಗಳೂರು ಸ್ಮಾರ್ಟ್ ಸಿಟಿ ಲಿ. ವತಿಯಿಂದ ಜವಾಹರ್ ಲಾಲ್ ನೆಹರು ತಾರಾಲಯ ಆವರಣದಲ್ಲಿ ನಿರ್ಮಿಸಿರುವ “ಯು.ಆರ್ ರಾವ್ ಭವನ” ವನ್ನು ಸನ್ಮಾನ್ಯ ಉಪ ಮುಖ್ಯ ಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವಾರದ ಶ್ರೀ ಡಿ.ಕೆ ಶಿವಕುಮಾರ್ ರವರು ಉದ್ಘಾಟಿಸಿದರು.
ಬೆಂಗಳೂರು ನಗರದ ಸಮೀಪವಿರುವ ಜವಹಾರ್ ಲಾಲ್ ನೆಹರು ತಾರಾಲಯವು ಭಾರತ ದೇಶದ ಐದು ತಾರಾಲಯಗಳ ಪೈಕಿ ಒಂದಾಗಿರುತ್ತದೆ. ಸ್ಮಾರ್ಟ್ ಸಿಟಿ ಮೀಷನ್ ಯೋಜನೆಯಡಿಯಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ಜವಾಹರ್ ಲಾಲ್ ನೆಹರು ತಾರಾಲಯದ ಆವರಣದಲ್ಲಿ ನೂತನವಾಗಿ ಐಜಿಬಿಸಿ ಗ್ರೀನ್ ಬಿಲ್ಡಿಂಗ್ ಪರಿಸರ ಸ್ನೇಹಿ ಮಾದರಿಯಲ್ಲಿ ಹೊಸ ಕಟ್ಟಡದ
ನಿರ್ಮಾಣಗೊಳಿಸಲಾಗಿದೆ.
ಕಟ್ಟಡದ ಪ್ರಮುಖ ಅಂಶಗಳು:
- ಯೋಜನೆಯ ಒಟ್ಟು ಮೊತ್ತ 42 ಕೋಟಿ ರೂ.
- 600 ಆಸನಗಳ ಆಡಿಟೋರಿಯಂ
- 4 ಉಪನ್ಯಾಸ ಸಭಾಂಗಣಗಳು 50 ಆಸನಗಳ ಸಾಮರ್ಥ್ಯ
- 1 ಉಪನ್ಯಾಸ ಸಭಾಂಗಣ 100 ಆಸನಗಳ ಸಾಮರ್ಥ್ಯ
- ಅಧ್ಯಕ್ಷರು ಮತ್ತು ಆಡಳಿತ ಮಂಡಳಿರವರ ಕೊಠಡಿಗಳು
- ವೀಕ್ಷಣಾ ದೂರದರ್ಶಕ (Observatory Telescope)
- 50 ಕಾರುಗಳಿಗೆ ಪಾರ್ಕಿಂಗ್ ಸೌಲಭ್ಯ
- 20 ಕೆ.ಎಲ್.ಡಿ. ಸಾಮರ್ಥ್ಯದ ತ್ಯಾಜ್ಯ ಸಂಸ್ಕರಣಾ ಘಟಕ (STP)
- ಎ.ಎಚ್.ಯು. (Air Handeling Unit) ಮತ್ತು ಇತರ ಸೇವೆಗಳು
- ಡಿಜಿ- 2 ಸಂಖ್ಯೆ (125 & 250 ಕೆವಿಎ ಸಾಮರ್ಥ್ಯದ ಜನರೇಟರ್)
- ಕಟ್ಟಡದ ಒಟ್ಟು ವಿಸ್ತೀರ್ಣ: 9949.00
ಪರಿಸರಸ್ನೇಹಿ ಕಟ್ಟಡದ ಪ್ರಮುಖ ಅಂಶಗಳು:
- ಒಳಾಂಗಣ ಗಾಳಿಯ ಗುಣಮಟ್ಟ : CO2 ಮಾನಿಟರ್ ಗಳ ಬಳಕೆ, ಕಡಿಮೆ ವಿಒಸಿ ಪೇಂಟ್, ಅಡ್ಹೆಸೀವ್
ಹಾಗೂ ಸಿಲಿಂಡರ್ಗಳ ಬಳಕೆ. - ನೀರಿನ ಸಂರಕ್ಷಣೆ (ಜಲ ಸಂರಕ್ಷಣೆ) : ಎಸ್ ಟಿ ಪಿ ನಿರ್ಮಾಣ, ಎ.ಸಿ. ವ್ಯವಸ್ಥೆ (ಹವಾನಿಯಂತ್ರಣ ವ್ಯವಸ್ಥೆ),
ಗಾರ್ಡನಿಂಗ್ ಮತ್ತು ಫ್ಲಷಿಂಗ್ಗೆ ಶೇ. 100ರಷ್ಟು ಸಂಸ್ಕರಿತ ನೀರಿನ ಬಳಕೆ. - ಕಟ್ಟಡದ ವಿನ್ಯಾಸ: ಸೂರ್ಯನ ಚಲನೆಗೆ ಅನುಗುಣವಾಗಿ ಕಟ್ಟಡದ ಓರಿಯೆಂಟೇಷನ್.
- ದೀಪದ ವ್ಯವಸ್ಥೆ: ವಿಷನ್ ಗ್ಲೇಜಿಂಗ್ ಮತ್ತು ಡೇಲೈಟ್ ಗ್ಲೇಜಿಂಗ್ ಸಂಯೋಜನೆಯ ಮೂಲಕ ಶೇ. 90 ಕ್ಕಿಂತ
ಹೆಚ್ಚಿನ ಜಾಗದಲ್ಲಿ ಹೊರಭಾಗದ ಗೋಚರತೆ ಹಾಗೂ ಶೇ. 75 ಕ್ಕಿಂತ ಹೆಚ್ಚಿನ ಜಾಗದಲ್ಲಿ ಹಗಲಿನ ಸಹಜ ಬೆಳಕಿನ
ಲಭ್ಯತೆ. - ಕೂಲಿಂಗ್: ಉಪನ್ಯಾಸ ಸಭಾಂಗಣದಲ್ಲಿ ವಾಟರ್ ಕೂಲ್ಡ್ ಚಿಲ್ಲರ್ಗಳು ಮತ್ತು ಅಂಡರ್ ಫ್ಲೋರ್ ಗಾಳಿ
ವಿತರಣಾ ವ್ಯವಸ್ಥೆಯ ಬಳಕೆ.

ಪ್ರತಿಜ್ಞಾ ವಿಧಿ ಸ್ವೀಕಾರ:
ಬೇಸ್ ಸಂಸ್ಥೆ ಅಧ್ಯಕ್ಷರಾದ ಶ್ರೀ ಕಿರಣ್ ಕುಮಾರ್ ರವರು ‘ರಾಷ್ಟ್ರೀಯ ವಿಜ್ಞಾನ ದಿನ’ದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಈ ವೇಳೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು, ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.
ಈ ವೇಳೆ ವಿಧಾನಸಭಾಧ್ಯಕ್ಷರಾದ ಶ್ರೀ ಯು ಟಿ ಖಾದರ್, ವಿಧಾನ ಪರಿಷತ್ ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿ, ಸಚಿವರುಗಳಾದ ಶ್ರೀ ಬೋಸರಾಜ್, ಶ್ರೀ ಕೃಷ್ಣ ಬೈರೇಗೌಡ, ಶ್ರೀ ಪ್ರಿಯಾಂಕ್ ಖರ್ಗೆ, ಡಾ. ಎಂ ಸಿ ಸುಧಾಕರ್, ಬೇಸ್ ಸಂಸ್ಥೆ ಅಧ್ಯಕ್ಷರಾದ ಶ್ರೀ ಕಿರಣ್ ಕುಮಾರ್, ಶಾಸಕರಾದ ಶ್ರೀ ರಿಜ್ವಾನ್ ಅರ್ಶದ್, ಶ್ರೀ ಸಲೀಂ ಅಹ್ಮದ್, ಆಡಳಿತಗಾರರಾದ ಉಮಾಶಂಕರ್, ಐಟಿ-ಬಿಟಿ ಇಲಾಖೆಯ ಕಾರ್ಯದರ್ಶಿಯಾದ ಏಕ್ ರೂಪ ಖೌರ್, ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಮತ್ತಿತರರು ಭಾಗವಹಿಸಿದ್ದರು.
Discover more from amiroNEWS
Subscribe to get the latest posts sent to your email.