Sunday, October 19, 2025
  • Login
  • Register
amiroNEWS
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
No Result
View All Result
News Post
amiroNEWS
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
No Result
View All Result
News Post
amiroNEWS
Home State Karnataka News

ಸಹಕಾರ ತತ್ವವೇ ಬಂಡವಾಳ ಶಾಹಿ, ಕಮ್ಯುನಿಸಂಗೆ ಉತ್ತರ: ಬಸವರಾಜ ಬೊಮ್ಮಾಯಿ

SP by SP
1 month ago
Reading Time: 1 min read
A A
18
SHARES
50
VIEWS

ಹಾವೇರಿ: ಬಂಡವಾಳ ಶಾಹಿ ಮತ್ತು ಕಮ್ಯುನಿಸ್ಟ್ ವ್ಯವಸ್ಥೆಗಳಿಗೆ ಸಹಕಾರ ತತ್ವವೇ ಸೂಕ್ತ ಉತ್ತರ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸಹಕಾರ ವ್ಯವಸ್ಥೆಯಡಿ ಆರ್ಥಿಕ ಬೆಳವಣಿಗೆಯ ನಿಯಂತ್ರಣ ಬಂದಾಗ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರ್ಥಿಕ ಸಮೃದ್ಧಿ ಸಾಧ್ಯವಾಗುತ್ತದೆ. ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಆರ್ಥಿಕ ನೀತಿಗಳನ್ನು ಜನರೇ ತೀರ್ಮಾನಿಸಬೇಕು. ಇದರಲ್ಲಿ ಸಹಕಾರ ರಂಗವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ತಿಳಿಸಿದರು.

ಹಾವೇರಿಯ ರಜನಿ ಸಭಾಂಗಣದಲ್ಲಿ ಶ್ರೀ ಸುವರ್ಣ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಬೆಳ್ಳಿ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಬೊಮ್ಮಾಯಿ, “ನಾಗರಿಕತೆ ಬೆಳೆದಂತೆ ಮನುಷ್ಯನ ಅವಶ್ಯಕತೆಗಳು ಹೆಚ್ಚಾಗಿವೆ. ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಮುಂದೆ ಬರಬೇಕೆಂಬುದು ಪ್ರತಿಯೊಬ್ಬರ ಕನಸು. ಈ ಕನಸು ನನಸಾಗಲು ವ್ಯಕ್ತಿಗಳು, ಸಂಘ-ಸಂಸ್ಥೆಗಳು ಮತ್ತು ಸರ್ಕಾರಗಳ ಸಹಕಾರ ಅಗತ್ಯ. ಜನ್ಮದಿಂದಲೇ ಹೋರಾಟ ಸಾಧ್ಯವಿಲ್ಲ; ತಾಯಿ, ತಂದೆ, ಗೆಳೆಯರ ಸಹಕಾರ ಬೇಕು. ಶಿಕ್ಷಣ ಪಡೆದು ಸ್ವತಂತ್ರವಾಗಿ ನಿಲ್ಲಲು ಆರ್ಥಿಕ ಸಹಾಯ ಅವಶ್ಯಕ. ಈ ಸಹಾಯ ದುಡಿಮೆಯಿಂದ ಬರುತ್ತದೆ. ಹಿಂದೆ ದುಡ್ಡೇ ದೊಡ್ಡಪ್ಪನಾಗಿತ್ತು; ಈಗ ದುಡಿಮೆಯೇ ದೊಡ್ಡಪ್ಪ. ಇದನ್ನೇ ಬಸವಣ್ಣನವರು ‘ಕಾಯಕವೇ ಕೈಲಾಸ’ ಎಂದರು. ಕಾಯಕಕ್ಕೆ ಮಹತ್ವ ಕೊಡುವ ಸಮಾಜ ಎಂದಿಗೂ ಬಡತನ ಎದುರಿಸುವುದಿಲ್ಲ,” ಎಂದರು.

ಸಹಕಾರ ವ್ಯವಸ್ಥೆಯ ಶಕ್ತಿ:
ಸುವರ್ಣ ಸಹಕಾರ ಸಂಘವು ಅನೇಕರ ಏಳಿಗೆಗಾಗಿ, ಅವರ ದುಡಿಮೆಗೆ ಸಹಾಯ ಮಾಡುವ ಉತ್ತಮ ವ್ಯವಸ್ಥೆಯಾಗಿದೆ ಎಂದ ಬೊಮ್ಮಾಯಿ, “ಸಹಕಾರ ವ್ಯವಸ್ಥೆಗೆ ಇರುವ ಶಕ್ತಿ ಬೇರೆ ಯಾವ ವ್ಯವಸ್ಥೆಗೂ ಇಲ್ಲ. ಬಂಡವಾಳ ಶಾಹಿಯಲ್ಲಿ ಕೇವಲ ಉತ್ಪಾದನೆ, ಕಮ್ಯುನಿಸ್ಟ್ ವ್ಯವಸ್ಥೆಯಲ್ಲಿ ಕೇವಲ ವಿತರಣೆ ಇರುತ್ತದೆ. ಆದರೆ ಸಹಕಾರ ವ್ಯವಸ್ಥೆ ಆರ್ಥಿಕ ಬೆಳವಣಿಗೆಯನ್ನು ನಿಯಂತ್ರಿಸಿ, ಪ್ರಜಾಪ್ರಭುತ್ವದಲ್ಲಿ ಆರ್ಥಿಕ ಸಮೃದ್ಧಿಯನ್ನು ತರುತ್ತದೆ,” ಎಂದರು.

ಅವರು ಮುಂದುವರಿದು, “ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಂಡವಾಳದ ಕೊರತೆಯಿಂದ ಮಾರುಕಟ್ಟೆಯಿಂದ ಹಣ ಪಡೆದು ಮೂಲಸೌಕರ್ಯ ಅಭಿವೃದ್ಧಿಪಡಿಸುತ್ತವೆ. ಆದರೆ ಮಾರುಕಟ್ಟೆಯ ಆದ್ಯತೆಗಳು ಸರ್ಕಾರವನ್ನು ನಿಯಂತ್ರಿಸುತ್ತವೆ. ಜನರಿಂದ ಆಯ್ಕೆಯಾದ ಸರ್ಕಾರ ಜನರ ಏಳಿಗೆಗೆ ಕೆಲಸ ಮಾಡಬೇಕಾದರೆ ಆರ್ಥಿಕ ಶಕ್ತಿ ಜನರ ಕೈಯಲ್ಲಿ ಇರಬೇಕು. ಪ್ರಧಾನಿ ಮೋದಿಯವರ ಆರ್ಥಿಕ ಕಾರ್ಯಕ್ರಮಗಳಿಂದ ಕಳೆದ 10 ವರ್ಷಗಳಲ್ಲಿ 25 ಕೋಟಿ ಜನ ಬಡತನದಿಂದ ಮೇಲೆ ಬಂದಿದ್ದಾರೆ. ಆರ್ಥಿಕ ಸ್ವಾತಂತ್ರ್ಯ ಸ್ಥಾಪನೆಗೆ ದೊಡ್ಡ ಮಟ್ಟದ ಆರ್ಥಿಕ ಕ್ರಾಂತಿ ಆಗಬೇಕು,” ಎಂದು ಒತ್ತಿ ಹೇಳಿದರು.

ಉದ್ಯೋಗವೇ ಮಾರ್ಗ:
ಬಾಂಗ್ಲಾದೇಶದ ಗ್ರಾಮೀಣ ಬ್ಯಾಂಕ್‌ಗಳ ಯಶಸ್ಸನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಬೊಮ್ಮಾಯಿ, “ಬಾಂಗ್ಲಾದೇಶದ ಮೊಹಮದ್ ಯೂನಿಸ್ ಅವರೊಂದಿಗೆ ಮಾತನಾಡಿದಾಗ, ಉಚಿತ ಕೊಡುಗೆಗಳ ಬದಲು ಜನರಿಗೆ ಉದ್ಯೋಗ ನೀಡಿ, ಸ್ವಾವಲಂಬನೆಯ ವ್ಯವಸ್ಥೆ ಸೃಷ್ಟಿಸಬೇಕು ಎಂದಿದ್ದರು. ಅವರು ಶೂನ್ಯ ಬಡ್ಡಿಯಲ್ಲಿ ಭಿಕ್ಷುಕರಿಗೆ ಸಾಲ ನೀಡಿ, ದಿನಬಳಕೆಯ ವಸ್ತುಗಳ ಮಾರಾಟಕ್ಕೆ ಪ್ರೋತ್ಸಾಹಿಸಿದ್ದಾರೆ. ಇದರಿಂದ 96,000 ಜನರಲ್ಲಿ 11,000ಕ್ಕೂ ಹೆಚ್ಚು ಜನ ಭಿಕ್ಷೆ ಬಿಟ್ಟು ಮಾರ್ಕೆಟಿಂಗ್ ಮಾಡುತ್ತಿದ್ದಾರೆ,” ಎಂದು ತಿಳಿಸಿದರು.

ಸೌಹಾರ್ದದಿಂದ ಸ್ವಾಭಿಮಾನದ ಬದುಕು:
ಪ್ರತಿ ಊರಿನಲ್ಲಿ ಸೌಹಾರ್ದ ಬ್ಯಾಂಕ್‌ಗಳು ಸ್ಥಾಪನೆಯಾದರೆ ಜನರ ಬದುಕು ಸ್ವಾಭಿಮಾನದಿಂದ ಕೂಡಿರುತ್ತದೆ ಎಂದ ಬೊಮ್ಮಾಯಿ, “ಸೌಹಾರ್ದ ಕಾಯ್ದೆಯನ್ನು ಜಾರಿಗೆ ತಂದ ಜೆ.ಎಚ್. ಪಟೇಲ್ ಮತ್ತು ಎಸ್.ಎಸ್. ಪಾಟೀಲ್ ಅವರಿಗೆ ವಿರೋಧವಿದ್ದರೂ, ಈ ವ್ಯವಸ್ಥೆ ಯಶಸ್ವಿಯಾಗಿದೆ. ಕೆಲವು ಸೌಹಾರ್ದ ಬ್ಯಾಂಕ್‌ಗಳ ಮೋಸದಿಂದ ಕೆಟ್ಟ ಹೆಸರು ಬಂದರೂ, ಸುವರ್ಣ ಪತ್ತಿನ ಬ್ಯಾಂಕ್ 900 ಕೋಟಿಗೂ ಹೆಚ್ಚಿನ ವಹಿವಾಟಿನೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಹೆಮ್ಮೆಯ ಸಂಗತಿ,” ಎಂದರು.

ಸಮಾರಂಭದಲ್ಲಿ ಶ್ರೀ ಮ.ನಿ.ಪ್ರ ಸದಾಶಿವ ಮಹಾಸ್ವಾಮಿಗಳು (ಹುಕ್ಕೇರಿ ಮಠ), ಬ್ಯಾಂಕಿನ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Tags: Bureau Newsnewnewsಅಭಿವೃದ್ಧಿಆರ್ಥಿಕಉಚಿತಉತ್ತರಉದ್ಯೋಗಕಾರ್ಯಕ್ರಮಕೆಲಸಕೇಂದ್ರಕ್ರಮಗ್ರಾಮೀಣಡಿತೀರದಿನದೇಶದೊಡ್ಡನದಿನಿಯಂತ್ರಣನಿಯಮನೀತಿಪತ್ತಿನಬಂಡವಾಳಬಸವಣ್ಣನಬಸವರಾಜಬೆಳವಣಿಗೆಬೆಳೆಬೊಮ್ಮಾಯಿಬ್ಯಾಂಕಿಂಗ್ಮಟ್ಟದಮಠಮತ್ತುಮಹಾಮಾರುಕಟ್ಟೆಮಾರ್ಗಮೋದಿಯೋಗರಾಜ್ಯಶಿಕ್ಷಣಸಹಾಯಸಾಲಸ್ವಾತಂತ್ರ್ಯಸ್ವಾಮಿಸ್ವಾವಲಂಬನಹಣಹೋರಾಟ

Subscribe Now and Never Miss an Update!

Unsubscribe
  • Trending
  • Comments
  • Latest

ಮಳೆ ವೇಳೆ ರಸ್ತೆಗೆ ಡಾಂಬರು ಹಾಕಲು ವೆಟ್ ಮಿಕ್ಸಿಂಗ್ ವಿಧಾನ ಬಳಕೆ: ಡಿಸಿಎಂ ಡಿ.ಕೆ.ಶಿವಕುಮಾರ್

4

ಬುಲ್ಸ್‌ಗೆ ಸವಾಲಾಗದ ಬೆಂಗಾಲ್‌ಅಲಿರೇಜಾ ಮತ್ತೊಮ್ಮೆ ಮಿಂಚು; ವಾರಿಯರ್ಸ್‌ ವಿರುದ್ಧ 43-32 ಅಂತರದ ಭರ್ಜರಿ ಗೆಲುವು

4

Invest Karnataka 2025 Kicks Off with a Grand Opening, Showcasing Innovation, Investments, and Global Collaborations

3

ಭಾರತ vs ಇಂಗ್ಲೆಂಡ್ 3ನೇ ಏಕದಿನ: 142 ರನ್ ಭರ್ಜರಿ ಜಯ, 3-0 ಸರಣಿ ಕ್ಲೀನ್ ಸ್ವೀಪ್!

2

ರೈತರ ಉತ್ಪನ್ನಗಳಿಗೆ ಹೆಚ್ಚಿನ ಬೆಲೆಗಾಗಿ ಕೃಷಿ ಸಂಸ್ಕರಣ ಘಟಕಗಳ ಸದುಪಯೋಗ: ನಿರ್ಮಲಾ ಸೀತಾರಾಮನ್ ಸಲಹೆ

October 16, 2025

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಡಿಜಿಟಲ್ ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

October 16, 2025

ಭಾರತದ ಗೃಹ ಸಚಿವ ಶ್ರೀ ಅಮಿತ್ ಶಾ ದೆಹಲಿಯಲ್ಲಿ ‘ನೆರಳುಗಳ ಎಕ್ಸ್‌ಟ್ರಡಿಷನ್ – ಸವಾಲುಗಳು ಮತ್ತು ರಣನೀತಿಗಳು’ ಸಮ್ಮೇಳನವನ್ನು ಉದ್ಘಾಟಿಸುತ್ತಾರೆ

October 15, 2025

ಮೇಘಾಲಯ, ತ್ರಿಪುರಾ ಪತ್ರಕರ್ತರ ನಿಯೋಗ ಬಿಎಚ್‌ಇಎಲ್ ಎಲೆಕ್ಟ್ರಾನಿಕ್ಸ್ ವಿಭಾಗಕ್ಕೆ ಭೇಟಿ

October 15, 2025

Recent News

ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ: ‘ಪಿಎಂ ಧನ್ ಧಾನ್ಯ ಕೃಷಿ ಯೋಜನೆ’ ಮತ್ತು ‘ದ್ವಿದಳ ಧಾನ್ಯಗಳಲ್ಲಿ ಆತ್ಮನಿರ್ಭರತೆಗಾಗಿ ಮಿಷನ್’ ಕಾರ್ಯಕ್ರಮದ ಉದ್ಘಾಟನೆ

October 11, 2025

ಮಳೆ ವೇಳೆ ರಸ್ತೆಗೆ ಡಾಂಬರು ಹಾಕಲು ವೆಟ್ ಮಿಕ್ಸಿಂಗ್ ವಿಧಾನ ಬಳಕೆ: ಡಿಸಿಎಂ ಡಿ.ಕೆ.ಶಿವಕುಮಾರ್

October 11, 2025

“ಸಿಎಂ ಆಗುವ ಕಾಲ ಹತ್ತಿರ ಬಂದಿದೆ ಎಂದು ಹೇಳಿಲ್ಲ, ಸುದ್ದಿ ತಿರುಚಲಾಗಿದೆ”: ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ

October 11, 2025

ಶೋಭಾ ಕಾರಂಡ್ಲಾಜೆ ಅವರಿಂದ ಎಂಎಸ್‌ಎಂಇ ಮಾರ್ಕೆಟಿಂಗ್ ಸಮ್ಮಿಟ್ ಉದ್ಘಾಟನೆ

October 10, 2025
  • Home
  • Privacy Policy
  • About Us
  • Advertise with us
  • Contact Us
Whatesapp +8050611655

© All right Reserved 2025 KRITIKALPAM TECHNOLOGIES PVT LTD - Empowering Every Voice. Enriching Every Life.

Welcome Back!

Login to your account below

Forgotten Password? Sign Up

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In
error:
  • Login
  • Sign Up
No Result
View All Result
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
News Post

© All right Reserved 2025 KRITIKALPAM TECHNOLOGIES PVT LTD - Empowering Every Voice. Enriching Every Life.