2025ರ ನೂತನ ವರ್ಷದ ಮೊದಲ ದಿನ, ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಮತ್ತು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರನ್ನು ನವದೆಹಲಿಯಲ್ಲಿ ಕರ್ನಾಟಕದ ಬಿ ಜೆ ಪಿ ರಾಜ್ಯಾಅದ್ಯಕ್ಷ ಬಿ ವೈ ವಿಜಯೇಂದ್ರರವರು ಭೇಟಿ ಮಾಡಿದರು. ಈ ಭೇಟಿಯ ಸಂದರ್ಭದಲ್ಲಿ, ರಾಜ್ಯದಲ್ಲಿ ಪಕ್ಷ ಸಂಘಟನೆಯ ಪ್ರಗತಿ, ಸರ್ಕಾರದ ವಿರುದ್ಧದ ಹೋರಾಟಗಳು, ಮತ್ತು ಕಾಂಗ್ರೆಸ್ ಆಡಳಿತದ ಫಲವಾಗಿ ಉದ್ಭವಿಸಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು.
ಕಳೆದ ವರ್ಷಗಳಿಂದ ಪಕ್ಷ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಕಾರ್ಯಪ್ರವೃತ್ತಿಗಳು ಹಾಗೂ ಮುಂದಿನ ದಿನಗಳಲ್ಲಿ ಕಾರ್ಯಗತಗೊಳ್ಳಲಿರುವ ಹೊಸ ಯೋಜನೆಗಳ ಕುರಿತು ಅಮಿತ್ ಶಾ ಅವರಿಗೆ ವಿವರಿಸಲಾಯಿತು. ಅಲ್ಲದೆ, ರಾಜ್ಯದಲ್ಲಿ ಕಾಂಗ್ರೆಸ್ ಸಚಿವರ ವಿರುದ್ಧ ಪ್ರಸ್ತುತ ಉಂಟಾಗಿರುವ ಆರೋಪಗಳ ಕುರಿತು ಚರ್ಚೆ ನಡೆಸಿ ಸೂಕ್ತ ಮಾರ್ಗದರ್ಶನವನ್ನು ಕೋರಲಾಯಿತು.
ಅಮಿತ್ ಶಾ ಅವರ ಸಂಘಟನಾ ಸಾಮರ್ಥ್ಯ ಮತ್ತು ದಿಟ್ಟ ನಾಯಕತ್ವವನ್ನು ಪ್ರಶಂಸಿಸಿದ ಬಿ ವೈ ವಿಜಯೇಂದ್ರರವರು, “ದೇಶದ ಸುಭದ್ರತೆಗೆ ಪ್ರಧಾನಿಯವರೊಂದಿಗೆ ಹೆಗಲಿಗೆ ಹೆಗಲು ಸೇರಿ ಮಹತ್ವದ ಹೆಜ್ಜೆ ಇಟ್ಟ ಅಮಿತ್ ಶಾ ಜೀ ಅವರು ಪಕ್ಷ ಸಂಘಟನೆಯ ಮೇಲೂ ಅಷ್ಟೇ ಕಾಳಜಿಯ ತೋರುತ್ತಿದ್ದಾರೆ. ಅವರ ಚತುರತೆ ಮತ್ತು ನಿರ್ಧಾರಗಳು ಪ್ರತಿ ಕಾರ್ಯಕರ್ತನಲ್ಲಿ ಆತ್ಮವಿಶ್ವಾಸವನ್ನು ತುಂಬುವ ಶಕ್ತಿ ಆಗಿವೆ,” ಎಂದು ಹೇಳಿದ್ದಾರೆ.
ಈ ಭೇಟಿಯು ಕರ್ನಾಟಕದಲ್ಲಿ ಪಕ್ಷ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಪ್ರೇರಣೆಯಾಗಿ ಕಾರ್ಯಕರ್ತರಿಗೆ ಹೊಸ ಉತ್ಸಾಹವನ್ನು ತುಂಬಿತು ಎಂದು ಬಿ ವೈ ವಿಜಯೇಂದ್ರರವರು ಹೇಳಿದ್ದಾರೆ.