ದಾವಣಗೆರೆ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಐಪಿಎಸ್ ರವರು ದಾವಣಗೆರೆ ನಗರದಲ್ಲಿ ಸಂಚರಿಸಿ ಸಂಚಾರ ನಿರ್ವಹಣೆ ವ್ಯವಸ್ಥೆ ಬಗ್ಗೆ, ಪಾರ್ಕಿಂಗ್, ಒನ್ ವ್ಹೇ, ಫುಟ್ ಪಾತ್ ನಿರ್ವಹಣೆ, ಸಂಚಾರ ಫಲಕಗಳ ಬಗ್ಗೆ ಪರಿಶೀಲಿಸಿದರು.
ದಾವಣಗೆರೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಸಂಕೀರ್ಣಗಳನ್ನು ಹೊಂದಿರುವ ಪ್ರಮುಖ ರಸ್ತೆಗಳಾದ ಮಂಡಿಪೇಟೆ ರಸ್ತೆ, ಬಿನ್ನಿ ಕಂಪನಿ ರಸ್ತೆಗಳಲ್ಲಿ ಅಂಗಡಿ ಮಾಲೀಕರು ಪಾದಚಾರಿ ಮಾರ್ಗವನ್ನು ಅಕ್ರಮಿಸಿಕೊಂಡಿರುವ ಬಗ್ಗೆ ಕೆಲವು ಮಾಲೀಕರಿಗೆ ನೋಟೀಸ್ ನೀಡುವುದರ ಜೊತೆಗೆ ದಂಡವನ್ನು ವಿಧಿಸಲಾಯಿತು. ಇನ್ನೂ ನಗರದ ಯಾವುದೇ ರಸ್ತೆಯಲ್ಲಿ ಈ ರೀತಿ ಪಾದಚಾರಿ ಮಾರ್ಗವನ್ನು ದುರ್ಬಳಕೆ ಮಾಡಿಕೊಂಡವರ ಮೇಲೆ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಪೊಲೀಸ್ ಅಧೀಕ್ಷಕರು ಸೂಚನೆಗಳನ್ನು ನೀಡಿದರು. ಅದೇ ರೀತಿ ವಾಹನ ಗಳ ನಿಲುಗಡೆ ಸರಿಯಾಗಿ ಮಾಡದ ವಾಹನ ಚಾಲಕರ ಮೇಲೆ ಐಎಂವಿ ಪ್ರಕರಣಗಳನ್ನು ದಾಖಲು ಮಾಡಲು ಸೂಚಿಸಿದರು.
ಸ್ಥಳೀಯ ಅಂಗಡಿ ಮಾಲೀಕರ ಸಲಹೆಗಳನ್ನು ಹಾಗೂ ಮೌಖಿಕ ಮನವಿಯನ್ನು ಪಡೆದು ಸಂಚಾರ ಪೊಲೀಸ್ ಅಧಿಕಾರಿಗಳಿಗೆ ಕ್ರಮಗಳನ್ನು ಕೈಗೊಳ್ಳಲು ಹಾಗೂ ನಗರದಲ್ಲಿಸಂಚಾರ ಸುಧಾರಣೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳು ಸೂಕ್ತ ಸೂಚನೆಗಳನ್ನು ನೀಡಿದರು.
ಈ ಸಂಧರ್ಭದಲ್ಲಿ ಸಂಚಾರ ಪೊಲೀಸ್ ಅಧಿಕಾರಿಗಳಾದ ಶ್ರೀ ಮಂಜಪ್ಪ, ಶ್ರೀಮತಿ ಜಯಶೀಲ ರವರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.