ಬೆಂಗಳೂರು: ಕರ್ನಾಟಕ ಸರ್ಕಾರದ ಮಂತ್ರಿ ಪ್ರಿಯಾಂಕ್ ಖರ್ಗೆ ಅವರು ಆಂಥ್ರೋಪಿಕ್ ಏಐ (Anthropic AI)ಯ ಬೆಂಗಳೂರು ಕಚೇರಿಗೆ ಭೇಟಿ ನೀಡಿ, ಆಡಳಿತ, ಶಿಕ್ಷಣ ಮತ್ತು ನಾವೀನ್ಯತೆಯ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯ (AI) ಪ್ರಾಯೋಗಿಕ ಅನ್ವಯಗಳ ಕುರಿತು ಫಲಪ್ರದ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಆಂಥ್ರೋಪಿಕ್ ತಂಡವು ಏಐ ಆಧಾರಿತ ನಾಗರಿಕ ಸೇವೆಗಳು, ಬಹುಭಾಷಾ ಅನುಭವಗಳು, ಜವಾಬ್ದಾರಿಯುತ ನಿಯೋಜನೆ ಮತ್ತು ಅಸ್ತಿತ್ವದಲ್ಲಿರುವ ಸರ್ಕಾರಿ ಡೇಟಾಸೆಟ್ಗಳನ್ನು ಬಳಸಿಕೊಂಡು ಸಾರ್ವಜನಿಕ ಸೇವಾ ವಿತರಣೆಯನ್ನು ಸುಧಾರಿಸುವ ಕುರಿತು ವಿವಿಧ ಪ್ರಾಯೋಗಿಕ ಅನ್ವಯಗಳನ್ನು ಪ್ರದರ್ಶಿಸಿತು.
ಚರ್ಚೆಯ ನಂತರ, ಆದ್ಯತೆಯ ಬಳಕೆಯ ಪ್ರಕರಣಗಳನ್ನು ಗುರುತಿಸಿ ಮುಂದುವರಿಸಲು ಇ-ಆಡಳಿತ ಕೇಂದ್ರ (Centre for e-Governance) ಮತ್ತು ಗೃಹ ಇಲಾಖೆಯೊಂದಿಗೆ ಎರಡು ಪ್ರತ್ಯೇಕ ಕಾರ್ಯಗಾರ ಗುಂಪುಗಳನ್ನು ರಚಿಸಲು ಒಪ್ಪಂದವಾಯಿತು.
ಜೊತೆಗೆ, ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಉದ್ಯಮಗಳಿಗೆ ಕ್ಲಾಡ್ (Claude) ಪ್ರಮಾಣಪತ್ರಗಳ ಮೂಲಕ ಕರ್ನಾಟಕದಾದ್ಯಂತ ಏಐ ಕೌಶಲ್ಯಾಭಿವೃದ್ಧಿಯನ್ನು ವಿಸ್ತರಿಸುವುದು, ಸ್ಟಾರ್ಟ್ಅಪ್ಗಳು ಮತ್ತು ಡೆವಲಪರ್ಗಳಿಗೆ ಆಂಥ್ರೋಪಿಕ್ನ ಏಐ ಸಾಧನಗಳನ್ನು ಬಳಸಲು ಅನುವು ಮಾಡಿಕೊಡುವುದು ಹಾಗೂ ಅವರ ‘ಏಐ ಫಾರ್ ಸೈನ್ಸ್’ ಮತ್ತು ‘ಕ್ಲಾಡ್ ಫಾರ್ ಎಜುಕೇಶನ್’ ಕಾರ್ಯಕ್ರಮಗಳ ಕುರಿತು ವಿಚಾರ ವಿನಿಮಯ ನಡೆಯಿತು.
“ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾದ ಏಐ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ನಮ್ಮ ಪ್ರಯತ್ನದಲ್ಲಿ ಆಂಥ್ರೋಪಿಕ್ನ ಪರಿಣತಿ ಮತ್ತು ಅನುಭವ ಅಮೂಲ್ಯವಾಗಿದೆ” ಎಂದು ಪ್ರಿಯಾಂಕ್ ಖರ್ಗೆ ಅವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.











