ಹುಬ್ಬಳ್ಳಿ ಗ್ರಾಮೀಣ ವ್ಯಾಪ್ತಿಯಲ್ಲಿ ಗ್ಯಾಸ್ ರಿಫಿಲಿಂಗ್ ದಂದೆ ನಡೆಸುತ್ತಿದ್ದ ಪ್ರಮುಖ ಆರೋಪಿಯನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೋಲಿಸರು ಬಂಧಿಸಿದ್ದಾರೆ.
ಹೌದು, ಹುಬ್ಬಳ್ಳಿ ಗ್ರಾಮೀಣ ಪೋಲಿಸರು ಡಿಸೆಂಬರ್ 15 ರಂದು ಹುಬ್ಬಳ್ಳಿ ಹೊರವಲಯ ತಾರಿಹಾಳದಲ್ಲಿ ಬಾಡಿಗೆ ರೂಪದಲ್ಲಿ ಈರಣ್ಣ ಹೊಸಪೇಟ ಎಂಬಾತ ಜಾಗ ಪಡೆದು ಅಕ್ರಮವಾಗಿ ಗ್ಯಾಸ್ ರಿಫಿಲಿಂಗ್ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿ, ಈ ವೇಳೆ ಬರೊಬ್ಬರಿ 248 ಕ್ಕಿಂತ ಹೆಚ್ಚು ಗ್ಯಾಸ್ ಸಿಲಿಂಡರ್, ಮೂರು ವಾಹನಗಳು, ಸೇರಿದಂತೆ ಇತರ ವಸ್ತುಗಳ ಸಿಕ್ಕಿವೇ ಅದರಲ್ಲಿ ಕರಾಳ ದಂದೆ ನಡೆಸುತ್ತಿದ್ದ ಕೈಲಾಸ್ ಗೋದೇರ್, ಕಿಶೋರಲಾಲ್ ಮುಕೇಶ್ ಕೃಷ್ಣರಾಮ, ಮಹ್ಮದ್ ಐನಾಪುರ ಎಂಬುವರನ್ನು ಬಂಧನ ಮಾಡಿದ್ದರು ಇನ್ನೂ ಪ್ರಮುಖ ಆರೋಪಿಯಾದ ಈರಣ್ಣ ಹೊಸಪೇಟ ಎಂಬಾತ ಪೋಲಿಸರ ಕಣ್ಣು ತಪ್ಪಿಸಿ ಓಡುತ್ತಿದ್ದ ಸುಮಾರು ದಿನಗಳ ನಂತರ ಹುಬ್ಬಳ್ಳಿ ಗ್ರಾಮೀಣ ಪೋಲಿಸ್ ಇನ್ಸ್ಪೆಕ್ಟರ್ ಮುರಗೇಶ್ ಚೆನ್ನಣ್ಣವರ ಕೈಗೆ ಈಗ ಸಿಕ್ಕಿ ಬಿದ್ದಿದ್ದಾನೆ. ಆರೋಪಿ ಈರಣ್ಣ ಹೊಸಪೇಟ ಹಾಗೂ ಮಹ್ಮದ್ ಐನಾಪುರ ಬಂಧಿಸಿ ಜೈಲಿಗೆ ಅಟ್ಡಿದ್ದಾರೆ. ಇನ್ನೂ ಗ್ಯಾಸ್ ರಿಫಿಲಿಂಗ್ ದಂದೇ ಹಿಂದಿರುವ ಎಜೆನ್ಸಿ ಯಾವುದು? ಏಜೆನ್ಸಿ ಮಾಲೀಕ ಯಾರು? ಇದರ ಕಿಂಗ್ ಪಿನ್ ಯಾರು ಎಂಬುದನ್ನಾ ಪತ್ತೆ ಮಾಡಲಿ ಎಂಬುದೇ ಜನರ ಒತ್ತಾಯ ಆಗಿದೆ.
Discover more from amiroNEWS
Subscribe to get the latest posts sent to your email.