ಸಿಂಧನೂರು ತಾಲೂಕಿನ ತುರ್ವಿಹಾಳ ಪಟ್ಟಣದ ಬಸವಚೇತನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಭೇಟಿ ನೀಡಿ ಕಾರ್ಯಾಲಯದಲ್ಲಿ ಯಾವ ರೀತಿಯಾಗಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ ಹಾಗೂ ಯಾವೆಲ್ಲ ಇಲಾಖೆಗಳು ಇವೆ ಎಂಬುವುದನ್ನು ಪ್ರಾಯೋಗಿಕವಾಗಿ ಅನುಭವ ಪಡೆದರು.
ಪಟ್ಟಣ ಪಂಚಾಯಿತಿಯ ಕಾರ್ಯ ವೈಖರಿಗಳ ಬಗ್ಗೆ ಮಕ್ಕಳೊಂದಿಗೆ ಹಂಚಿಕೊಂಡ ಮುಖ್ಯಾಧಿಕಾರಿ ಸಾಬಣ್ಣ ಕಟ್ಟೆಕಾರ್ ಪಟ್ಟಣ ಪಂಚಾಯತಿಗೆ ಬರುವ ಅನುದಾನಗಳಾದ ಎಸ್ ಎಪ್ ಸಿ, 15 ನೇ ಹಣಕಾಸು, ನಗರೋತ್ಥಾನ, ಹಾಗೂ ಪಟ್ಟಣ ಪಂಚಾಯತಿ ಸದಸ್ಯರ ಚುನಾವಣೆ ಅಧ್ಯಕ್ಷ ಮತ್ತು ಉಪಾದ್ಯಕ್ಷರ ಆಯ್ಕೆ ಮುಖ್ಯ ಅಧಿಕಾರಿಗಳನ್ನು ಹೇಗೆ ಆಯ್ಕೆ ಮಾಡುತ್ತಾರೆ ಸೇರಿದಂತೆ ಇತರೆ ಸಿಬ್ಬಂದಿಗಳ ಬಗ್ಗೆ ಹಾಗೂ ಪಂಚಾಯತಿಯ ಅಧಿಕಾರ ಮತ್ತು ಕಾರ್ಯಗಳ ಬಗ್ಗೆ ವಿಧ್ಯಾರ್ಥಿಗಳಿಗೆ ಪಾಠ ಮಾಡಿದರು.
ಆಸ್ತಿ ತೇರಿಗೆ, ಪ್ರಸ್ತುತ ಕಾಮಗಾರಿಗಳ ವಿವರ, ಬೀದಿ ವ್ಯಾಪಾರಿ, ಅಂಗಡಿ ಪರವಾನಿಗೆ, ಆಸ್ತಿ ತೆರಗೆ ವಸೂಲಿ, ಸ್ವಚ್ಚ ಭಾರತ ಯೋಜನೆಯಡಿ ಪೌರಕಾರ್ಮಿಕರ ಕಾರ್ಯ ಮತ್ತು ಇತರೆ ವಿಷಯಗಳ ಕುರಿತು ವಿದ್ಯಾರ್ಥಿಗಳ ಪ್ರಶ್ನೆಗೆ ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ನಿಡಿದರು.
Discover more from amiroNEWS
Subscribe to get the latest posts sent to your email.